ಲಂಚದ ಆಮಿಷ: ಚಾಮರಾಜನಗರ ಸಂಚಾರ ಮುಖ್ಯ ಪೇದೆ ‘ಔಟ್’!
ವರದಿ : ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಚಾಮರಾಜನಗರ: ಖಾಕಿ ಅಂಗಿಯ ಅಹಂಕಾರ ಹಾಗೂ ಕೈಬಿಸಿ ಮಾಡುವ ಚಾಳಿ ಕೊನೆಗೂ ಒಬ್ಬ ಮುಖ್ಯ ಪೇದೆಯ ಕೆಲಸಕ್ಕೆ ಕುತ್ತು ತಂದಿದೆ! ಬಡ ಸವಾರನಿಗೆ ಕಿರುಕುಳ ನೀಡಿ, ಲಂಚಕ್ಕಾಗಿ ಆಮಿಷವೊಡ್ಡಿದ ಆರೋಪದ ಮೇಲೆ ಚಾಮರಾಜನಗರ ನಗರ ಸಂಚಾರ ಠಾಣೆಯ ಮುಖ್ಯ ಪೇದೆ ಮಲ್ಲು ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಏನಿದು ಘಟನೆ? ಸಂಚಾರ ನಿಯಮ ಉಲ್ಲಂಘನೆ ಹೆಸರಲ್ಲಿ ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲು ಮಲ್ಲು…

