ಅಕ್ರಮ ತರಗತಿ, ಹಣ ದುರುಪಯೋಗ, ಬೆದರಿಕೆ ಆರೋಪ: ಅಮಾನತಾದ ಶೋಭರಾಣಿ ಪರ RTI ಕಾರ್ಯಕರ್ತನ ಕಸರತ್ತು!?
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶಿಕ್ಷಣ ಕ್ಷೇತ್ರದ ಘಟನೆಯೊಂದರಲ್ಲಿ, ತೂಬಿನಕೆರೆಯ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶೋಭರಾಣಿ ಸಿ. ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆಡಳಿತ ಉಪನಿರ್ದೇಶಕರು ಹೊರಡಿಸಿರುವ ಈ ಆದೇಶದ ಬೆನ್ನಲ್ಲೇ ಶಿಕ್ಷಕಿಯ ವಿರುದ್ಧ ಹಲವು ಗಂಭೀರ ಆರೋಪಗಳ ಪಟ್ಟಿ ಹೊರಬಿದ್ದಿದೆ. ಇಲಾಖೆಯ ಯಾವುದೇ ಪೂರ್ವಾನುಮತಿ ಪಡೆಯದೆ ಅಕ್ರಮವಾಗಿ ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಿ, ಸ್ಥಳೀಯ ಅಂಗನವಾಡಿ ಕೇಂದ್ರದ ಅಸ್ತಿತ್ವಕ್ಕೇ ಧಕ್ಕೆ ತಂದಿದ್ದಾರೆ…

