Headlines

​ಅಂದು 136, ಇಂದು 2028ರ ಭವಿಷ್ಯ! ಸಿಎಂ ಪ್ರಶ್ನೆಗೆ ಮೌನವಾದ ಡಿಸಿಎಂ ಗುಟ್ಟೇನು?

​”ಇಂದೇ ಪೇಪರ್‌ನಲ್ಲಿ ಬರೆದಿಟ್ಟುಕೊಳ್ಳಿ, 2028ರಲ್ಲೂ ಇದೇ ಡಿಕೆ ಶಿವಕುಮಾರ್ ಇರುತ್ತಾರೆ, ಇದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ!”—ಹೀಗೆಂದು ಭವಿಷ್ಯ ನುಡಿಯುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ನೇರ ಸವಾಲು ಹಾಕಿದ್ದಾರೆ.​ರಾಜ್ಯ ಬಿಜೆಪಿಯು ಮುಂದಿನ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬೆನ್ನಲ್ಲೇ, ಇತ್ತ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ, ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ​ಅಂದು 136, ಇಂದು 2028ರ ಭವಿಷ್ಯ!…

Read More

ರೌಡಿಗಳ ಬೆವರಿಳಿಸಿದ ಎಸ್‌ಪಿ ಮುತ್ತುರಾಜು: ತಂಟೆಗೆ ಬಂದ್ರೆ ಜೈಲು ಫಿಕ್ಸ್ ಎಂದು ವಾರ್ನಿಂಗ್!

ವರದಿ : ರಾಮಸಮುದ್ರ ಎಸ್. ವೀರಭದ್ರ ಸ್ವಾಮಿ ಚಾಮರಾಜನಗರ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ವಿವಿಧ ಠಾಣೆಗಳಲ್ಲಿ ರೌಡಿಶೀಟ್ ಹೊಂದಿರುವ ಹಾಗೂ ಸರಣಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿದ್ದ ಸಮಾಜವಿರೋಧಿ ಶಕ್ತಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶ್ರೀ ಮುತ್ತುರಾಜು ಎಂ. ಖಡಕ್ ವಾರ್ನಿಂಗ್ ನೀಡಿದ್ದಾರೆ. ಮೇ 25ರ ಸೋಮವಾರದಂದು ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲೆಯ ಇತಿಹಾಸದಲ್ಲೇ ಅತಿ…

Read More

ಉಪ ಲೋಕಾಯುಕ್ತರ ಭೇಟಿ ಬೆನ್ನಲ್ಲೇ ಕಲೆಕ್ಷನ್ ದಂಧೆ: ಮಂಡ್ಯದಲ್ಲಿ ಭಾಸ್ಕರ ರಾವ್ ಕಪ್ಪು ಇತಿಹಾಸ ಮರುಕಳಿಸಿತೇ?

ಮಾನ್ಯ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಿರುವ ಒಂದು ಸ್ಪೋಟಕ ದೂರು ಈಗ ಮಂಡ್ಯ ಮತ್ತು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮಂಡ್ಯ ಹಾಗೂ ಮಳವಳ್ಳಿ ತಾಲೂಕುಗಳ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರದ ತನಿಖೆ ನಡೆಸಲು ಬಂದಿರುವ ಉಪ ಲೋಕಾಯುಕ್ತರ ಹೆಸರಿನಲ್ಲೇ ಈಗ ಕೋಟ್ಯಂತರ ರೂಪಾಯಿ ವಸೂಲಿ ದಂಧೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳಿಗೆ ತನಿಖೆಯಿಂದ ‘ಕ್ಲೀನ್ ಚಿಟ್’ ಕೊಡಿಸುವುದಾಗಿ ನಂಬಿಸಿ, ಪಂಚಾಯತಿ ಮಟ್ಟದ ಸಿಬ್ಬಂದಿಯಿಂದ ಹಿಡಿದು ಕ್ಲಾಸ್ 1 ದರ್ಜೆಯ ಅಧಿಕಾರಿಗಳವರೆಗೆ ಎಲ್ಲರಿಂದಲೂ ಲಕ್ಷ ಲಕ್ಷ…

Read More

ಸಾರ್ವಜನಿಕ ಸೇವಾ ಕಾಯ್ದೆ ಗಾಳಿಗೆ ತೂರಿದ ಪಿಡಿಒ ಶೋಭಾರಾಣಿ: ಮೇಲಾಧಿಕಾರಿಗಳ ಮೌನದ ವಿರುದ್ಧ ಸಾರ್ವಜನಿಕರ ತೀವ್ರ ಅಸಮಾಧಾನ.!?

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ. ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸಾರ್ವಜನಿಕ ಸೇವೆ ಸಂಪೂರ್ಣ ಹದಗೆಟ್ಟಿದ್ದು, ಕಚೇರಿ ವೇಳೆಯಲ್ಲೇ ಬೀಗ ಹಾಕಿ ಸಿಬ್ಬಂದಿ ನಾಪತ್ತೆಯಾಗಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರದ ಬಿರುಬಿಸಿಲಿನ ನಡುವೆಯೂ ವಿವಿಧ ಪ್ರಮಾಣಪತ್ರಗಳು, ತುರ್ತು ದಾಖಲಾತಿಗಳು ಹಾಗೂ ಸರ್ಕಾರದ ಸೌಲಭ್ಯಗಳಿಗಾಗಿ ದೂರದ ಗ್ರಾಮಗಳಿಂದ ಬಂದಿದ್ದ ಬಡ ಜನತೆ ಪಂಚಾಯತಿ ಕಚೇರಿ ಎದುರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸಾರ್ವಜನಿಕರನ್ನು ಸ್ವಾಗತಿಸಿದ್ದು ಮಾತ್ರ ಕಚೇರಿಯ ಮುಖ್ಯ ದ್ವಾರಕ್ಕೆ ಹಾಕಿದ್ದ ಬೀಗವೇ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಯಿತು.ದಿನಾಂಕ…

Read More

ಮಂಡ್ಯ ಮೂಲದ ವ್ಯಕ್ತಿಯ ಐಡೆಂಟಿಟಿ ಬಳಸಿ ಬೆಸ್ಕಾಂ ಇಂಜಿನಿಯರ್ ಆಗಿದ್ದ ಬೊಮ್ಮೇಗೌಡನ ಆಟ ಕ್ಲೈಮ್ಯಾಕ್ಸ್ನಲ್ಲಿ ಪ್ಲಾಪ್!

ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ 40 ವರ್ಷಗಳ ಹಿಂದಿನ ಮಹಾ ವಂಚನೆಯೊಂದು ತನಿಖೆಯ ಹಂತದಲ್ಲಿದೆ. 1982ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿಯ ಎಂ. ರಾಚಯ್ಯ ಎಂಬ ಯುವಕ ಶಿವಮೊಗ್ಗದ ಕರ್ನಾಟಕ ವಿದ್ಯುತ್ ಮಂಡಳಿಯ ಗ್ಯಾಂಗ್‌ಮನ್ ಹುದ್ದೆಯ ಸಂದರ್ಶನಕ್ಕೆ ಹೋಗಿದ್ದಾಗ ಅವರ ಮಾರ್ಕ್ಸ್‌ಕಾರ್ಡ್ ಮತ್ತು ಪ್ರಮಾಣಪತ್ರಗಳು ಕಳೆದುಹೋಗಿದ್ದವು. ಅದೇ ಸಂದರ್ಶನಕ್ಕೆ ಬಂದಿದ್ದ ಹಾಸನ ಮೂಲದ ಬೊಮ್ಮೇಗೌಡನಿಗೆ ಈ ದಾಖಲೆಗಳು ಸಿಕ್ಕಿದ್ದವು. ಬೊಮ್ಮೇಗೌಡ ತಾನೇ ‘ರಾಚಯ್ಯ’ ಎಂದು ಸೋಗು ಹಾಕಿ, ಆ ನಕಲಿ ಐಡೆಂಟಿಟಿ ಮೂಲಕವೇ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ. ​ಅಸಲಿ…

Read More

ಧಾರಾ ನಗರಿಯ ಮಸೀದಿ ಕೆಳಗೆ ಸಿಕ್ಕಿತು ದೇವಸ್ಥಾನದ ಪುರಾವೆ: ಹಿಂದೂಗಳ ಹೋರಾಟಕ್ಕೆ ಮಹಾ ಜಯ!

ಮಧ್ಯಪ್ರದೇಶದ ಅತ್ಯಂತ ವಿವಾದಿತ ಧಾರ್ಮಿಕ ತಾಣವಾದ ಧಾರಾ ಜಿಲ್ಲೆಯ ಭೋಜಶಾಲಾ ಸಂಕೀರ್ಣದ ಮೇಲೆ ಈಗ ಸಂಪೂರ್ಣವಾಗಿ ಭಗವಾ ಧ್ವಜ ಹಾರಾಡಿದೆ! ದಶಕಗಳ ಕಾಲ ನಡೆದ ಕಾನೂನು ಸಮರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹೈಕೋರ್ಟ್ ಈ ವಿವಾದಿತ ಜಾಗವನ್ನು ಸಂಪೂರ್ಣವಾಗಿ ಹಿಂದೂಗಳ ಆರಾಧ್ಯ ದೇವತೆ ವಾಗ್ದೇವಿ ಸರಸ್ವತಿ ದೇವಿಯ ದೇವಸ್ಥಾನ ಎಂದು ಘೋಷಿಸಿ ಐತಿಹಾಸಿಕ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರಿದ್ದ ದ್ವಿಸದಸ್ಯ ಪೀಠವು ಈ ಭರ್ಜರಿ ಆದೇಶ ಹೊರಡಿಸಿದ್ದು, ಹಿಂದೂಗಳ…

Read More

ಇಸ್ಪೀಟ್ ಜೂಜಾಟ ಆಡುತ್ತಿದ್ದವರು ಅರೆಸ್ಟ್:5 ಲಕ್ಷ ಹಣ,ಕಾರು,ಬೈಕ್ ವಶ

ಚಾಮರಾಜನಗರ: ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಚಾಮರಾಜನಗರ ಜಿಲ್ಲಾ ಪೊಲೀಸರು ದಾಳಿ ಮಾಡಿ ನಗದು, ಮೊಬೈಲ್‌ಗಳು, ಕಾರು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಎಂ ಅವರಿಗೆ ಜಿಲ್ಲೆಯಲ್ಲಿ ಒಂದು ತಂಡ ವಾಹನದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ಅಂದರ್ ಬಾಹರ್ ಇಸ್ಪೀಟಿನ ಜೂಜಾಟ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಪರ ಪೊಲೀಸ್ ಅಧೀಕ್ಷಕರಾದ ಎಂ.ಎನ್ ಶಶಿಧರ್ ಅವರಿಗೆ ನಿರ್ದೇಶನ ನೀಡಿದ್ದರು. ಶಶಿಧರ್ ಅವರ ಮಾರ್ಗದರ್ಶನದಲ್ಲಿ…

Read More

ಮಂಡ್ಯ : ಹಳೆ ಕಟ್ಟಡದ ಕಬ್ಬಿಣ ನುಂಗಿದ ಆರೋಪಿಗೆ ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಭಾಗ್ಯ…!?

ಜಿಲ್ಲಾ ಪಂಚಾಯಿತಿಯಲ್ಲಿ ಕಳ್ಳತನವಾದ ಸಾವಿರಾರು ಕೆಜಿ ಕಬ್ಬಿಣದ ಕಳ್ಳತನದ ಆರೋಪಿ ಇದೀಗ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನ..!? ‘ಶಹಭಾಷ್’ ಮಂಡ್ಯ….!ಜಿಲ್ಲಾಡಳಿತಕ್ಕೆ ಇಂತಹ ವಿಚಾರದಲ್ಲಿ ಅದೇನು ಜಾಣ ಕುರುಡೋ ಅಥವಾ ಭ್ರಷ್ಟರಿಗೆ ಮಣೆ ಹಾಕುವ ಮನಸ್ಥಿತಿಯೋ..!? ಯಾವುದು ತಿಳಿಯದಾಗಿದೆ ಅಥವಾ ಮಂಡ್ಯ ಜಿಲ್ಲೆಯಲ್ಲಿ ಪ್ರಶಸ್ತಿಯು ಮಾರಾಟವಾಗಿದೆಯೇ..! ಎಂಬ ಪ್ರಶ್ನೆ ಕಾಡುತ್ತಿದೆ. ಸದ್ಯಕ್ಕೆ ಡಾ. ಶಿವಲಿಂಗಯ್ಯ ಎಂಬ ವ್ಯಕ್ತಿ ಮೂಲತಹ ಪಶು ಸಂಗೋಪನಾ ಇಲಾಖೆಗೆ ಸಂಬಂಧ ಪಟ್ಟವರು, ಮಂಡ್ಯ ಜಿಲ್ಲೆಯಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಬರವೇನೋ… ಎಂಬಂತೆ ಜಿಲ್ಲಾ ಪಂಚಾಯಿತಿ…

Read More

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೃಹತ್ ಸರ್ಜರಿ; ಸದ್ದಿಲ್ಲದೆ ವರ್ಗಾವಣೆ ಆದೇಶ ಹೊರಡಿಸಿದ ಸರ್ಕಾರ!

ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯಾದ್ಯಂತ ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲದಿಂದ ಮನೆಮಾಡಿದ್ದ ವರ್ಗಾವಣೆ ಕಾಯುವಿಕೆಗೆ ಕೊನೆಗೂ ತೆರೆಬಿದ್ದಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ರಾಜ್ಯ ಸರ್ಕಾರವು ಭಾನುವಾರ ರಾತ್ರಿ ಬೃಹತ್ ಪ್ರಮಾಣದ ವರ್ಗಾವಣೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪೊಲೀಸ್ ಪಡೆಯಲ್ಲಿ ಸಂಚಲನ ಮೂಡಿಸಿದೆ. ​ವರ್ಗಾವಣೆಯ ಮುಖ್ಯಾಂಶಗಳು: ಹುದ್ದೆಯ ದರ್ಜೆ ಅಧಿಕಾರಿಗಳ ಸಂಖ್ಯೆ ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) 293 ಡಿವೈಎಸ್‌ಪಿ (ಸಿವಿಲ್) / ಎಸಿಪಿ 74 ಒಟ್ಟು ವರ್ಗಾವಣೆ 367 ಪೊಲೀಸ್ ಸಿಬ್ಬಂದಿ ಮಂಡಳಿಯ (PEB) ಮಹತ್ವದ ಸಭೆಯ…

Read More

ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ, ಖಾರದ ಪುಡಿ ಎರಚಿ ಚಾಕುವಿನಿಂದ ದಾಳಿ; ಜಮೀನು ವಿಚಾರವೇ ಕಾರಣ ಶಂಕೆ!

ಚಾಮರಾಜನಗರ, ಮೇ 8: ಜಿಲ್ಲೆಯ ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹೊಂಗನೂರು ಗ್ರಾಮದ ಲಾಂಗ್ ಮಹದೇವ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಜಮೀನು ವಿಚಾರವಾಗಿ ಮಾತನಾಡಬೇಕಿದೆ ಎಂದು ಕರೆ ಮಾಡಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ ಆರೋಪಿಗಳು, ಬಳಿಕ ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮೊದಲು ಮಹದೇವ ಅವರ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು, ನಂತರ ಚಾಕುವಿನಿಂದ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಚುಚ್ಚಿ ಗಂಭೀರವಾಗಿ…

Read More
error: Content is protected !!