Headlines

ಹುಲಿಕೆರೆ ಪಿಡಿಓ ಸೀನನ ಡೀಲ್ ಗೆ ಬಗ್ಗಿದ ಶ್ರೀರಂಗಪಟ್ಟಣ ಎಂಎಲ್ಎ!?

ಅಕ್ರಮಗಳ ಸರದಾರ ಹುಲಿಕೆರೆ ಪಂಚಾಯಿತಿ ಪಿಡಿಒ ಶ್ರೀನಿವಾಸನ ಆರ್ಭಟದ ಮುಂದೆ ಎಂಎಲ್ಎ ರಮೇಶ್ ಬಂಡಿಸಿದ್ದೇಗೌಡ್ರು ಬಂಡಿ ಬಿಡಬೇಕಷ್ಟೇ.
ಸೀನನ ಎಂಜಲು ಕಾಸಿಗೆ ಕೈ ಒಡ್ಡಿ ಮೂರು ಕಾಸಿನ ಮರ್ಯಾದೆಯೂ ಇಲ್ಲದಂತೆ ಮಾಡಿಕೊಂಡ ರಮೇಶ್ ಬಂಡಿಸಿದ್ದೇಗೌಡ್ರು, ಶಾಸಕನಾಗಿ ಜನತೆಯ ಹಿತ ಕಾಯಬೇಕಾದ ರಮೇಶ್ ಬಂಡಿಸಿದ್ದೇಗೌಡ ಎಂಬ ನಾಲಾಯಕ್ ವ್ಯಕ್ತಿ ಒಬ್ಬನನ್ನು ಗೆಲ್ಲಿಸಿದ ತಪ್ಪಿಗಾಗಿ ಇಡೀ ಶ್ರೀರಂಗಪಟ್ಟಣ ತಾಲೂಕಿನ ಜನತೆ ತಮ್ಮ ನಟಿಕೆ ಮುರಿಯುತ್ತಾ ಶಾಪ ಹಾಕುತ್ತಿದ್ದಾರೆ.

ಇವನ ಧನದಾಹಕ್ಕೆ ಸಾಲು ಸಾಲು ಅಕ್ರಮ ನಡೆದರು ಇವನೇ ಮುಚ್ಚಿ ಹಾಕುತ್ತಿದ್ದಾನೆ. ಒಂದು ಕಡೆಯಿಂದ ತಾನೇ ದೂರು ಕೊಡುವುದು! ಇನ್ನೊಂದು ಕಡೆ ಅಧಿಕಾರಿಗಳು ನನ್ನ ಮಾತನ್ನು ಕೇಳುತ್ತಿಲ್ಲ ಎಂದು ಬೊಂಬಡ ಬಜಾಯಿಸುವುದು! ಕಡೆಗೆ ಅವರು ಎಸೆಯುವ ಚಿಲ್ಲರೆ ಕಾಸಿಗೆ ಸಗಣಿ ಮೇಲೆ ನಾಲಿಗೆ ಹಾಕಿ ನೆಕ್ಕುವಂತೆ ನೆಕ್ಕಿ ಅವರನ್ನೇ ಕಾಪಾಡುವುದು, ತದನಂತರ ಹಿರಿಯ ಅಧಿಕಾರಿಗಳನ್ನು ಬಾಯಿಗೆ ಬಂದಂಗೆ ಬೈಯುವುದು, ಇಂಥ ನೀಚ ವಿಕೃತಿಯ ಮನಸ್ಸಿನ ಶಾಸಕನನ್ನು ಜನರು ಹೇಗಾದರೂ ಸಹಿಸಿಕೊಂಡಿದ್ದಾರೋ..!

ಚಿತ್ರ ಕೃಪೆ tv9

ಈ ಹಿಂದೆ ಹುಲಿಕೆರೆ ಪಂಚಾಯಿತಿಯ ಅಕ್ರಮಗಳು ಎಲ್ಲೆ ಮೀರಿದ್ದು, ಇಡೀ ಜಿಲ್ಲೆಗೆ ಗಬ್ಬೆದ್ದು ನಾರುತಿದೆ. ರಮೇಶ್ ಬಂಡಿಸಿದ್ದೇಗೌಡನ ಬಾಮೈದನೆಂದು ಊರು ಸುತ್ತ ಬೊಗಳಿಕೊಂಡು ತಿರುಗುತ್ತಿರುವ ಮಂಜ ಅಲಿಯಾಸ್ ಗೊಂಬೆ ಮಂಜ ಅಥವಾ ಕರಿ ಮಂಜ ಇನ್ನು ಅನೇಕ ಅಲಿಯಾಸ್ ಗಳನ್ನು ಸೇರಿಸಿಕೊಂಡಿರುವ ಮಂಜುನಾಥ ಎಂಬ ವ್ಯಕ್ತಿಯನ್ನು ಇಟ್ಟುಕೊಂಡು ಅಕ್ರಮ ದಂದೆಯನ್ನು ಅವನ ಮುಖಾಂತರ ಮಾಡಿಸುತ್ತಿರುವ ರಮೇಶ್ ಬಂಡಿಸಿದ್ದೇಗೌಡ, ಮೊನ್ನೆ ಮೊನ್ನೆಯಷ್ಟೇ ಈ ಕರಿ ಮಂಜ ಆಲಿಯಾಸ್ ಗೊಂಬೆ ಮಂಜನ ಬರ್ತಡೆಗೆ ಇಡೀ ಸರ್ಕಾರಿ ಮಿಷನರಿಯೇ ಅಲ್ಲಿ ಸೇರಿತ್ತು, ಇವನ್ಯಾವ ಪುಡಾಂಗ ಎಂದು ಸರ್ಕಾರಿ ಅಧಿಕಾರಿಗಳು ಹೋಗಿ ಅವನಿಗೆ ಬರ್ತಡೇ ಮಾಡಿ ಬಂದರೋ ನಮ್ಮ ಶಾಸಕರೇ ಹೇಳಬೇಕು.

ಇಲ್ಲಿ ಜನಕ್ಕೆ ಕಾಡುತ್ತಿರುವುದು ಈ ಕರಿಮಂಜನಿಗೂ ನಮ್ಮ ನಾಲಾಯಕ್ ಶಾಸಕ ರಮೇಶ್ ಬಂಡಿ ಸಿದ್ದೇಗೌಡರಿಗೂ ಯಾವ ರೀತಿಯ ಮಾವ ಬಾಮೈದ ಎಂಬ ಸಂಬಂಧ..? ಆ ವಿಷಯ ನಮಗೆ ಯಾಕೆ ನೇರ ವಿಚಾರಕ್ಕೆ ಬರೋಣ.

ಈ ಮಂಜ ಇಡೀ ಪಂಚಾಯಿತಿಯ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದಾನೆ ಎಂಬುದು ಇದಾಗಲೇ ಸಾಬೀತಾಗಿದೆ. ಈ ಹಿಂದೆ ಅಂಬೇಡ್ಕರ್ ಭವನ ಕೆಡವಿ ಹೊಸ ಕಟ್ಟಡ ಕಟ್ಟುವ ವಿಚಾರದಲ್ಲಿ ನಡೆದ ಘರ್ಷಣೆಯಲ್ಲಿ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಜೆಡಿಎಸ್ ನ ಮಾಜಿ ಎಮ್ಎಲ್ಎ ರವೀಂದ್ರ ಶ್ರೀಕಂಠಯ್ಯ ರವರನ್ನು ಪೂಜೆಗೆ ಕರೆಸಿದ್ದರು ಎಂಬ ಕಾರಣಕ್ಕೆ ಇಡಬಾರದ ಜಾಗಕ್ಕೆ ಮೆಣಸಿನಕಾಯಿ ಇಟ್ಟಂಗೆ ಹೆಗರಾಡಿ, ಕುಣಿದಾಡಿದ ರಮೇಶ ಬಂಡಿಸಿದ್ದೇಗೌಡ ಆಲಿಯಾಸ್ ನಾಲಾಯಕ್ ಶಾಸಕ ಈ ಕೂಡಲೇ ಹುಲಿಕೆರೆ ಪಂಚಾಯಿತಿಯ ಪಿಡಿಓ ಶ್ರೀನಿವಾಸ್ ಅಲಿಯಾಸ್ ಫೋರ್ಜರಿ ಸೀನಾ ಇವನ ಇತಿಹಾಸವನ್ನು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ವಿವರಿಸುತ್ತೇವೆ. ಈ ಫೋರ್ಜರಿ ಸೀನನ ಅಕ್ರಮವನ್ನು ಹೊರಗೆಳೆದು ಈ ಕೂಡಲೇ ಅಮಾನತ್ತು ಮಾಡಿ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಗೆ ತಪರಾಕಿ ಹಾಕಿದ ನಾಲಾಯಕ್ ಶಾಸಕ, ಫೋರ್ಜರಿ ಸೀನಾ ಅಲಿಯಾಸ್ ಪಿಡಿಒ ಶ್ರೀನಿವಾಸನ ಲಂಚ ಎಂಬ ಅಮೆಧ್ಯ ಅದೆಷ್ಟು ರುಚಿಯಾಗಿತ್ತೋ…. ತನ್ನ ಸೋ ಕಾಲ್ಡ್ ಬಾಮೈದ ಬೊಂಬೆ ಮಂಜ ಅಲಿಯಾಸ್ ಕರಿ ಮಂಜ ಪಡೆದುಕೊಂಡ ಪ್ಯಾಕೆಟಿಗೆ ರಮೇಶ್ ಬಂಡಿಸಿದ್ದೇಗೌಡ ಆಲಿಯಾಸ್ ನಾಲಾಯಕ್ ಶಾಸಕ ಕೂಲಾಗಿ ಬಿಟ್ಟ.!

ಇದ್ದಕ್ಕಿದ್ದಂಗೆ ತಾನು ಕೊಟ್ಟ ಆದೇಶವನ್ನು ತಡೆಹಿಡಿಯಲು ಅಧಿಕಾರಿಗಳಿಗೆ ಆದೇಶ ಕೊಟ್ಟೆ ಬಿಟ್ಟ ರಮೇಶ್ ಬಂಡಿಸಿದ್ದೇಗೌಡ. ಪಂಚಾಯಿತಿಗೆ ಬರುವಾಗಲೇ ಕಂತೆ ಕಂತೆ ಕೊಟ್ಟಿದ್ದ, ಅಷ್ಟಕ್ಕೂ ಮಾಡಿದ ತಪ್ಪಿಗೆಲ್ಲ ಒಂದೊಂದು ಪ್ಯಾಕೆಟ್ ಎಂಬಂತೆ ಫಿಕ್ಸ್ ಮಾಡಿಸಿದ್ದೇ ಕರಿಮಂಜನ ಶಿಷ್ಯ ಮಾಮ ಅಲಿಯಾಸ್ ರಾಮ ಇವನೇನು ಸಾಮಾನ್ಯನಲ್ಲ ಭಯಂಕರ ನಿಸ್ಸೀಮ, ಯಾಮಾರಿದರೆ ರಮೇಶ್ ಬಂಡಿಸಿದ್ದೇಗೌಡನಿಗೂ ಗೂಟ ಹಿಡೋದು ಫಿಕ್ಸ್.

ನಾಚಿಕೆ ಮಾನ ಮರ್ಯಾದೆ ಎಲ್ಲವನ್ನು ಬಿಟ್ಟಿರುವ ಈ ನಾಲಾಯಕ್ ಶಾಸಕ ಇನ್ನೆಷ್ಟು ಅಮೇಧ್ಯಕ್ಕಾಗಿ ಡಬಲ್ ಕ್ರಾಸ್ ಮಾಡಿ ಮುಂದೆಯಿಂದ ತಾನೇ ಪಿಡಿಒಗಳನ್ನು ಕಿತ್ತು ಹಾಕಲು ಹೇಳುವುದು, ಅವರು ಅಮೇದ್ಯ ಉದುರಿಸುತ್ತಿದ್ದಂಗೆ ಮಹಾಪ್ರಸಾದವೆಂದು ಅವರಿಗೆ ಅಭಯ ನೀಡುವುದು.
ಎಲ್ಲಿಗೆ ಬಂತು ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣ ತಾಲೂಕಿನ ಘನತೆ!? ಇನ್ನಾದರೂ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ತಮ್ಮ ಗೌರವವನ್ನಾದರೂ ಉಳಿಸಿಕೊಂಡರೆ ಒಳಿತು ಇಂಥ ಹೊಲಸು ಕೈನ ಶಾಸಕರ ಅಡಿಯಾಳಾಗೋ ಬದಲು ತಮ್ಮ ಅಧಿಕಾರವನ್ನು ಬಳಸಿ ಜನತೆಗೆ ಶಾಂತಿ ನೆಮ್ಮದಿಯನ್ನು ನೀಡಲಿ.

Leave a Reply

Your email address will not be published. Required fields are marked *

error: Content is protected !!