ಎಚ್ಐವಿ ಪೀಡಿತ ತಮ್ಮನನ್ನು ಕೊಲೆಗೈದ ಅಕ್ಕ, ಕೊಲೆಗೆ ಸಾಥ್ ನೀಡಿದ ಪತಿ..!?
ಹೊಳಲ್ಕೆರೆ, ಜುಲೈ 28: ಹೆಚ್ಐವಿ ಪೀಡಿತನಾಗಿದ್ದ ತಮ್ಮನಿಂದ ನಮ್ಮ ಮನೆ ಮರ್ಯಾದೆ ಹೋಗುತ್ತದೆ ಎಂದು ಸ್ವತಃ ಅಕ್ಕನೇ ತನ್ನ ಗಂಡನ ಜೊತೆ ಸೇರಿ ಆತನನ್ನು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ. ಹೀಗೆ ತನ್ನ ಒಡಹುಟ್ಟಿದ ಅಕ್ಕನಿಂದಲೇ ಕೊಲೆಗೀಡಾದ ಯುವಕನನ್ನು ಮಲ್ಲಿಕಾರ್ಜುನ್(23) ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೊಲೆಗೀಡಾದ ಮಲ್ಲಿಕಾರ್ಜುನನ ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಲ್ಲಿಕಾರ್ಜುನ್ ಬೆಂಗಳೂರಿನಲ್ಲಿ ಗಾರ್ಮೆಂರ್ಟ್ನಲ್ಲಿ…

