ಜಾತಿ ಸಮೀಕ್ಷೆ ಮೂಲಕ ಹಿಂದೂ ಸಮಾಜ ದುರ್ಬಲಗೊಳಿಸಲು ರಾಜ್ಯ ಸರಕಾರ ಯತ್ನ: ಬಿಜೆಪಿ ಮುಖಂಡ ಡಾ.ಸುಶ್ರುತಗೌಡ ಆರೋಪ
ಮೈಸೂರು,ಸೆಪ್ಟೆಂಬರ್ 18 : ಕರ್ನಾಟಕ ಹಿಂದುಳಿದ ಆಯೋಗ ಕೈಗೆತ್ತಿಕೊಂಡಿರುವ ಜಾತಿ ಗಣತಿಯನ್ನು ಹಿಂದುಳಿದ ಸಮಾಜಗಳ ಸಬಲೀಕರಣದ ಬದಲಿಗೆ ಹಿಂದೂ ಧರ್ಮವನ್ನು ದುರ್ಬಲಗೊಳಿಸಲು ರಾಜ್ಯ ಸರಕಾರ ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಹೈಕಮಾಂಡ್ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಚಾಮರಾಜಕ್ಷೇತ್ರದ ಬಿಜೆಪಿ ಮುಖಂಡರಾದ ಡಾ.ಸುಶ್ರುತಗೌಡ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ರೈಸ್ತ ಹಾಗು ಇಸ್ಲಾಂ ಧರ್ಮಗಳಿಗೆ, ಹಿಂದೂ ಧರ್ಮದಿಂದ ಮತಾಂತರಗೊಂಡವರಿಗೆ ಅವರ ಮೂಲ ಜಾತಿಯನ್ನು ನಮೂದಿಸಲು ಅವಕಾಶ ನೀಡಿ, ಹಿಂಬಾಗಿಲ ಮೂಲಕ ಮೀಸಲಾತಿಯನ್ನು ದುರ್ಬಳಕೆ…

