ಚಿತ್ತಾಪುರ: ಆರೆಸ್ಸೆಸ್-ಭೀಮ್ ಆರ್ಮಿ ಪಥಸಂಚಲನ ಸಮರದ ಬೆನ್ನಲ್ಲೇ ಮತ್ತೆರಡು ಸಂಘಟನೆಗಳಿಂದಲೂ ಪಥಸಂಚಲನಕ್ಕೆ ಅರ್ಜಿ!
ಕಲಬುರಗಿ, ಅಕ್ಟೋಬರ್ 23: ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರ ಜಿಲ್ಲೆಯ ಚಿತ್ತಾಪುರ ಸದ್ಯ ರಾಜ್ಯಾದ್ಯಂತ ಸುದ್ದಿಯಲ್ಲಿದೆ. ಏಕೆಂದರೆ ಆರ್ಎಸ್ಎಸ್ ಪಥಸಂಚಲನ ಸಂಬಂಧ ಭಾರೀ ಪೈಪೋಟಿ ನಡೆದಿದ್ದು, ನವೆಂಬರ್ 2ರಂದು ಕೋರ್ಟ್ ಮೆಟ್ಟಿಲೇರಿ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್ಎಸ್ಎಸ್ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆ ಭೀಮ್ ಆರ್ಮಿ ಸಹ ಅಂದೇ ಪಥಸಂಚಲನಕ್ಕೆ ಅನುಮತಿ ನೀಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಇದೀಗ ಕುರುಬ ಸಮುದಾಯ ಸಹ ಎಸ್ಟಿ ಮೀಸಲಾತಿಗಾಗಿ ಪ್ರತಿಭಟನೆ ಮಾಡಲು…

