ಲೋಕಾ ಬಲೆಗೆ ಸಂಚಾರಿ ಠಾಣೆ ಮುಖ್ಯಪೇದೆ
ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.ಚಾಮರಾಜನಗರ: ಜಪ್ತಿಯಾದ ವಾಹನ ಬಿಡಿಸಿಕೊಳ್ಳಲು ಲಂಚದ ಬೇಡಿಕೆ ಇಟ್ಟಿದ್ದ ಮುಖ್ಯಪೇದೆ ಲೋಕಾಯುಕ್ತರು ಬೀಸಿದ ಬಲೆಗೆ ಬಲಿಯಾಗಿದ್ದಾರೆಚಾಮರಾಜನಗರ ಸಂಚಾರಿ ಠಾಣೆಯ ಮುಖ್ಯಪೇದೆ ಮಲ್ಲು ಎಂಬುವವರೆ ಲೋಕ ಬಲೆಗೆ ಬಿದ್ದ ಪೇದೆಯಾಗಿದ್ದಾರೆ. ಬಂಡಿಗೆರೆ ಗ್ರಾಮದ ದೂರುದಾರರೊಬ್ಬರು ಜಪ್ತಿಯಾಗಿದ್ದ ವಾಹನವನ್ನ ನ್ಯಾಯಾಲಯದ ಆದೇಶ ಮೇರೆಗೆ ವಾಹನ ಬಿಡಿಸಿಕೊಳ್ಳಲು ಮೂರು ಸಾವಿರ ಲಂಚದ ಬೇಡಿಕೆಯನ್ನ ಮುಖ್ಯಪೇದೆ ಮಲ್ಲು ಇಟ್ಟಿದ್ದರು ಎನ್ನಲಾಗಿದೆ. ದೂರುದಾರರ ಮೇರೆಗೆ ಸಂಚಾರಿ ಠಾಣೆಯಲ್ಲೆ ಹಣ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಸ್ಪಿ ಹಾಗೂ ಸಿಬ್ಬಂದಿಗಳು ದಾಳಿ ಕಾರ್ಯದಲ್ಲಿ ಭಾಗವಹಿಸಿದ್ದರು….

