ರಾತ್ರಿ ಆದ್ರೆ ಸಾಕು ಪೊಲೀಸ್ ಠಾಣೆಗಳು ಕ್ಲೋಸ್: ಡಿಜಿಪಿ ಸಲೀಂ ಅವ್ರೇ ಇದನ್ನೊಮ್ಮೆ ನೋಡಿ!
ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಗಡಿ ಜಿಲ್ಲೆ ಚಾಮರಾಜನಗರದ ಪೊಲೀಸ್ ಇಲಾಖೆಯಲ್ಲಿ ವಿಚಿತ್ರವೊಂದು ಜಾರಿಯಲ್ಲಿದೆ. “ಜನಸ್ನೇಹಿ ಪೊಲೀಸ್” ಎಂಬ ಘೋಷವಾಕ್ಯಕ್ಕೆ ಇಲ್ಲಿನ ಕೆಲವು ಠಾಣೆಗಳು ಅಕ್ಷರಶಃ ಬೀಗ ಜಡಿಯುತ್ತಿವೆ. ಜಿಲ್ಲೆಯ ಸೆನ್ (CEN) ಮತ್ತು ಮಹಿಳಾ ಪೊಲೀಸ್ ಠಾಣೆಗಳು ರಾತ್ರಿ ಹೊತ್ತಾದರೆ ಸಾಕು, ದೂರುದಾರರಿಗಾಗಿ ಕಾಯುವ ಬದಲು ಬಾಗಿಲಿಗೆ ಬೀಗ ಹಾಕಿಕೊಂಡು ವಿಶ್ರಮಿಸುತ್ತಿರುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ವರದಿಯ ಪ್ರಕಾರ, ಮಾರ್ಚ್ 26ರ ರಾತ್ರಿ 9 ಗಂಟೆ ಹಾಗೂ 27ರ ಬೆಳಗಿನ ಜಾವ 8 ಗಂಟೆಯ ಸಮಯದಲ್ಲೂ…

