Headlines

newsfilemagazine

MIMS ಆಸ್ಪತ್ರೆಯಲ್ಲಿ ಮೆಡಿಸಿನ್ ಅಕ್ರಮ ದಂಧೆಯಲ್ಲಿ ಸಿಬ್ಬಂದಿಗಳು ಭಾಗಿ!?

ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ನಡೆದಿರುವ ಘಟನೆಯೊಂದು ಸರ್ಕಾರಿ ಆಸ್ಪತ್ರೆಗಳ ಆಡಳಿತ ವ್ಯವಸ್ಥೆ, ಔಷಧ ವಿತರಣೆ ಹಾಗೂ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ತೀವ್ರ ಅನುಮಾನಗಳನ್ನು ಹುಟ್ಟುಹಾಕಿದೆ. ಬಡ ಕುಟುಂಬದ ಮಹಿಳೆಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸಹಜ ಹೆರಿಗೆ ಸಾಧ್ಯವಾಗದ ಕಾರಣ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ದುರದೃಷ್ಟವಶಾತ್ ನವಜಾತ ಶಿಶು ಮೃತಪಟ್ಟಿತ್ತು. ಮಾನಸಿಕವಾಗಿ ಕುಗ್ಗಿದ್ದ ಕುಟುಂಬವು ಮಹಿಳೆಯ ಆರೋಗ್ಯ ಚೇತರಿಕೆಯಾಗಲಿ ಎಂಬ ಆಶಯದಿಂದ ಚಿಕಿತ್ಸೆಯನ್ನು ಮುಂದುವರಿಸಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ನೀಡಬೇಕಾದ ಸಾಮಾನ್ಯ ನೋವು ನಿವಾರಕ…

Read More

ವ್ಯಾಪಕ ಬಂದೋಬಸ್ತ್ ನಡುವೆ ಚಾಮರಾಜೇಶ್ವರ ರಥೋತ್ಸವ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ.ಜು.27-ಚಾಮರಾಜನಗರ ಪಟ್ಟಣದಲ್ಲಿ ಶ್ರೀ ಚಾಮರಾಜೇಶ್ವರ ಆಷಾಡ ರಥೋತ್ಸವ, ಜಾತ್ರೆಯು ಜುಲೈ 28 ರಂದು ನಡೆಯಲಿದ್ದು ಈ ಸಂಬಂಧ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಅಗತ್ಯ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಹೆಣ್ಣು ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಈವ್ ಟೀಸಿಂಗ್ ಮಾಡುವಂತಹ ಪುಂಡರ ಹಾವಳಿ ತಡೆಗಟ್ಟಲು ಪ್ರತ್ಯೇಕವಾಗಿ ತಂಡವನ್ನು ಹಾಗೂ “ಅಕ್ಕಪಡೆಯ” ಅಧಿಕಾರಿ,ಸಿಬ್ಬಂದಿಯನ್ನು ನಿಯೋಜಿಸಿದ್ದು, ಈವ್ ಟೀಸಿಂಗ್ ಮಾಡುವವರು ಕಂಡುಬಂದಲ್ಲಿ ಅಂತಹವರ ವಿರುದ್ಧ ಕೂಡಲೇ ಕಾನೂನು ರೀತ್ಯಾ ಕ್ರಮವಹಿಸುವ ಎಚ್ಚರಿಕೆ ನೀಡಲಾಗುವುದು….

Read More

5 ದಶಕಗಳ ಸುದೀರ್ಘ ಪಯಣಕ್ಕೆ ವಿರಾಮ: ರಾಜಕೀಯ ನಿವೃತ್ತಿ ಪ್ರಕಟಿಸಿದ ಸಿದ್ದರಾಮಯ್ಯ!

ಕರ್ನಾಟಕ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ, ಐದು ದಶಕಗಳ ತಮ್ಮ ಸುದೀರ್ಘ ರಾಜಕೀಯ ಪಯಣದ ತೆರೆಗೆ ಕ್ಷಣಗಣನೆ ಆರಂಭಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ದಿವಂಗತ ಕೆ.ಆರ್. ಪೇಟೆ ಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಈ ಮಹತ್ವದ ನಿರ್ಧಾರವನ್ನು ಹೊರಹಾಕಿದರು. ವೇದಿಕೆಯಲ್ಲಿದ್ದ…

Read More

KPSC ಯಲ್ಲಿ ಕ್ಯಾಶ್‌ ಫಾರ್‌ ಜಾಬ್‌ ಧಂದೆ: ₹80 ಲಕ್ಷದ ಲಂಚದ ಆಡಿಯೋ ವೈರಲ್‌, ಅಭ್ಯರ್ಥಿಗಳ ಆಕ್ರೋಶ!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಮತ್ತೊಂದು ಬೃಹತ್ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದ್ದು, ಒಂದೊಂದು ಹುದ್ದೆಯನ್ನು ಬರೋಬ್ಬರಿ ₹80 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ. ಹಣಕ್ಕಾಗಿ ಡೀಲ್: ವೈರಲ್ ಆಯ್ತು ವಿಡಿಯೋ!​ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಮಧ್ಯವರ್ತಿ ಮೊಹಮ್ಮದ್ ಆರಿಫ್ ಹಾಗೂ ವಿದ್ಯಾರ್ಥಿ ಸಂಘಟನೆಯ ಮುಖಂಡ ಕಾಂತಕುಮಾರ್ ನಡುವಿನ ಫೋನ್ ಸಂಭಾಷಣೆ ಬಯಲಾಗಿದೆ. ಹುದ್ದೆಗಾಗಿ ನೇರವಾಗಿ ಲಕ್ಷಾಂತರ ರೂಪಾಯಿ…

Read More

ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣ: 38 ಮಂದಿಗೆ ಮರಣದಂಡನೆ ಎತ್ತಿಹಿಡಿದ ಹೈಕೋರ್ಟ್

2008ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಸಂಪೂರ್ಣವಾಗಿ ಎತ್ತಿಹಿಡಿದಿರುವ ನ್ಯಾಯಾಲಯ, ಪ್ರಕರಣದ 49 ಅಪರಾಧಿಗಳಲ್ಲಿ 38 ಮಂದಿಗೆ ವಿಧಿಸಿದ್ದ ಮರಣದಂಡನೆ ಹಾಗೂ ಉಳಿದ 11 ಮಂದಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿದೆ. ಜೊತೆಗೆ, ಅಪರಾಧಿಗಳು ಸಲ್ಲಿಸಿದ್ದ ಎಲ್ಲಾ ಮೇಲ್ಮನವಿಗಳನ್ನು ವಜಾಗೊಳಿಸಿ, ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ​ನ್ಯಾಯಮೂರ್ತಿಗಳಾದ…

Read More

ರಾಮ ಮಂದಿರ ಬ್ಲಾಸ್ಟ್‌ಗೆ ಪಾಕ್ ಜೊತೆ ಸ್ಕೆಚ್: ಹರಿಹರದಲ್ಲಿ ಪೇಂಟರ್ ಸೋಗಿನಲ್ಲಿದ್ದ ಉಗ್ರ ಸುಹೇಲ್ ಲಾಕ್!

ದಾವಣಗೆರೆಯ ಹರಿಹರದಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರ ಸುಹೇಲ್ ಇಡೀ ದೇಶದ ಭದ್ರತಾ ಪಡೆಗಳ ನಿದ್ದೆಗೆಡಿಸಿದ್ದಾನೆ. ಈತನ ಮೊಬೈಲ್ ಅನ್‌ಲಾಕ್ ಮಾಡ್ತಿದ್ದಂತೆ ಪೊಲೀಸರೇ ಬೆಚ್ಚಿಬಿದ್ದಿದ್ದು, ಅಯೋಧ್ಯೆಯ ಭವ್ಯ ರಾಮ ಮಂದಿರವನ್ನು ಬಾಂಬ್ ಇಟ್ಟು ಉಡಾಯಿಸಲು ಸ್ಕೆಚ್ ಹಾಕಿದ್ದ ಭಯಾನಕ ಸತ್ಯ ಎಫ್‌ಐಆರ್‌ನಲ್ಲಿ ರಿವೀಲ್ ಆಗಿದೆ. ​ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಜೊತೆ ನಿರಂತರ ಟಚ್‌ನಲ್ಲಿದ್ದ ಸುಹೇಲ್, ತನ್ನ ವಾಟ್ಸಾಪ್‌ನ ‘ಲಾಕ್‌ಡ್ ಚಾಟ್’ನಲ್ಲಿ ಪಾಕ್ ಮೂಲದ ನಂಬರ್ ಒಂದನ್ನು ‘ರಾಣಾ ಜೀ’ ಅಂತ ಸೇವ್ ಮಾಡಿಕೊಂಡಿದ್ದ. ಇವರಿಬ್ಬರ ನಡುವೆ ನಡೆದಿರೋ ಉರ್ದು ಮಿಶ್ರಿತ…

Read More

ಖಂಡ್ರೆ ಕಾಲಿಡುತ್ತಿದ್ದಂಗೆ ಶುರುವಾಯ್ತ ಅಕ್ರಮ…!?

ಸರ್ಕಾರಿ ಆದೇಶದ ಹೆಸರಲ್ಲಿ ಗ್ರೇಡ್-1 ಕಾರ್ಯದರ್ಶಿಗಳ ಜೇಷ್ಠತಾ ಪಟ್ಟಿ ಮತ್ತು ಮುಂಬಡ್ತಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರದ ದಂಧೆ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ದಿನಾಂಕ 15-07-2023ರ ಸರ್ಕಾರಿ ಆದೇಶದ ಅನ್ವಯ 2024ರಿಂದಲೇ ಈ ಜೇಷ್ಠತಾ ಪಟ್ಟಿ ಸಿದ್ಧಪಡಿಸುವ ಕಾರ್ಯ ಆರಂಭವಾಗಿದ್ದರೂ, ಕಳೆದ ಎರಡು ವರ್ಷಗಳಲ್ಲಿ ಸಭೆ ಮತ್ತು ನಿರ್ದೇಶನಗಳ ಹೆಸರಿನಲ್ಲಿ ಬರೊಬ್ಬರಿ 50ರಿಂದ 70ಕ್ಕೂ ಹೆಚ್ಚು ಬಾರಿ ಸಭೆಗಳನ್ನು ನಡೆಸಲಾಗಿದೆ. ಆದರೆ, ಪ್ರತಿ ಬಾರಿಯೂ ಯಾವುದೇ ಸೂಕ್ತ ಕಾರಣವಿಲ್ಲದೆ ಪ್ರಕ್ರಿಯೆಯನ್ನು ಮುಂದೂಡುತ್ತಾ ಕಾಲಹರಣ ಮಾಡಲಾಗಿದೆ ಎಂಬ…

Read More

​ಬೆಂಗಳೂರಲ್ಲಿ ಖಾಕಿ ಖದೀಮನ ಖೇಲ್: ಉದ್ಯಮಿಗಳಿಗೆ ಗನ್ ಇಟ್ಟು ಸುಲಿಗೆ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್!

ಬೆಂಗಳೂರಿನಲ್ಲಿ ಕಾನೂನು ರಕ್ಷಕನೇ ಭಕ್ಷಕನಾದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಿಐಡಿ ವಿಭಾಗದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಂಬಾತನೇ ಗ್ಯಾಂಗ್ ಕಟ್ಟಿಕೊಂಡು ಕೇರಳ ಮೂಲದ ಉದ್ಯಮಿಗಳನ್ನು ಹೆದರಿಸಿ 20 ಲಕ್ಷ ರೂಪಾಯಿ ಲೂಟಿ ಮಾಡಿದ್ದಾನೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದರೋಡೆಗೆ ಇಲಾಖೆಯ ಅಧಿಕೃತ ಸಿಐಡಿ ಜೀಪನ್ನೇ ಬಳಸಿರುವುದು ಸದ್ಯ ತೀವ್ರ ಸಂಚಲನ ಮೂಡಿಸಿದೆ. ​ದರೋಡೆ ನಡೆದಿದ್ದು ಹೇಗೆ? ​ವ್ಯಾಪಾರ ಮತ್ತು ಟ್ರೇಡಿಂಗ್ ಉದ್ದೇಶಗಳಿಗಾಗಿ ಕೇರಳದ ಉದ್ಯಮಿಗಳು ದೊಡ್ಡ ಮೊತ್ತದ ನಗದಿನೊಂದಿಗೆ ಬೆಂಗಳೂರಿಗೆ ಬಂದು,…

Read More

ರೌಡಿಸಂಗೆ ಬ್ರೇಕ್ ಹಾಕಲು ಖಾಕಿ ಸಜ್ಜು:ಎಸ್‌ಪಿ ಮುತ್ತುರಾಜು ಆದೇಶದ ಬೆನ್ನಲ್ಲೇ ‘ರೌಡಿ ನಿಗ್ರಹ ದಳ’ ರಚನೆ!

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ರೌಡಿಗಳ ಹೆಡೆಮುರಿ ಕಟ್ಟಲು ಚಾಮರಾಜನಗರ ಜಿಲ್ಲೆಯ 4 ವೃತ್ತ ಹಾಗೂ 7 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ “ರೌಡಿ ನಿಗ್ರಹ ದಳ” ಅನ್ನು ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀ ಮುತ್ತುರಾಜು ಎಂ., ಐಪಿಎಸ್ ಅವರ ಆದೇಶದ ಮೇರೆಗೆ ಈ ಕಡಕ್ ಕ್ರಮ ಕೈಗೊಳ್ಳಲಾಗಿದ್ದು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರಾಜ್ಯಾದ್ಯಂತ…

Read More

ರಾಜ್ಯ ವಕೀಲರ ಪರಿಷತ್ತಿಗೆ ಪಿ.ಪಿ. ಹೆಗ್ಡೆ ಸತತ ನಾಲ್ಕನೇ ಬಾರಿಗೆ ಆಯ್ಕೆ

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾಗಿ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪರಿಷತ್ತಿನ ಒಟ್ಟು 23 ಸದಸ್ಯ ಸ್ಥಾನಗಳಿಗಾಗಿ ಮಾರ್ಚ್ 11 ರಂದು ಚುನಾವಣೆ ನಡೆದಿತ್ತು. ಮಾರ್ಚ್ 16 ರಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 17ರ ಬುಧವಾರ ಹೊರಬಿದ್ದ ಫಲಿತಾಂಶದ ಅನ್ವಯ ಪಿ.ಪಿ. ಹೆಗ್ಡೆ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಈ ಗೆಲುವಿನ ಮೂಲಕ ಸತತ ನಾಲ್ಕನೇ ಬಾರಿಗೆ ಅವರು ವಕೀಲರ ಪರಿಷತ್ತನ್ನು ಪ್ರವೇಶಿಸಿದಂತಾಗಿದೆ. ಹಿರಿಯ…

Read More
error: Content is protected !!